Manasarowar Pushkarini Vidyashrama
Affliliated to CBSE, New Delhi | Affiliation Number: 830043
Home
Our School
About
Core Values
Our Vision
Our Mission
Principal’s Desk
CBSE
Mandatory Disclosure
POCSO
Facilities
Transport
Laboratories
Library
Beyond the Classroom
Co – Curricular Activities (CCA)
Summer School Singapore
Field Trips
Club Activities
School Band
Sports and Yoga
Achievements
Accolades
International School Award
School Excellence Award 2019
Academics
Curriculum
QShala
Gallery
Contact us
Admissions Open
ಪುಷ್ಕರಿಣಿಯಲ್ಲಿ ಕಳೆ ಕಟ್ಟಿದ ಕನ್ನಡ ನುಡಿ ಹಬ್ಬ 2022
29 Nov 2022
ಪುಷ್ಕರಿಣಿಯಲ್ಲಿ ಕಳೆ ಕಟ್ಟಿದ ಕನ್ನಡ ನುಡಿ ಹಬ್ಬ
ಮೈಸೂರಿನ ವಿಜಯ ನಗರದಲ್ಲಿರುವ ಮಾನಸರೋವರ ಪುಷ್ಕರಿಣಿ ವಿದ್ಯಾಶ್ರಮದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಜನಪದ ನುಡಿ ಹಬ್ಬವನ್ನು 29.11.2022ರಂದು ಶಾಲಾ ಆವಾರದಲ್ಲಿ ಆಚರಿಸಲಾಯಿತು. ಬೆಳಗ್ಗೆ ಒಂಬತ್ತು ಗಂಟೆಗೆ ಪುಷ್ಕರಣಿಯ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಸಮ್ಮುಖದಲ್ಲಿ ವೇದಿಕೆಯ ಮೇಲೆ ಅತಿಥಿಗಳಿಂದ ದೀಪೋಜ್ವಲನ ಹಾಗೂ ಧ್ವಜಾರೋಹಣದ ಮೂಲಕ ಕನ್ನಡ ನುಡಿ ಹಬ್ಬಕ್ಕೆ ಚಾಲನೆ ದೊರೆಯಿತು.
ಮುಖ್ಯ ಅತಿಥಿಗಳಾಗಿ ಶ್ರೀಯುತ ಮೈಸೂರ್ ಆನಂದ್ ರವರು (ಖ್ಯಾತ ಹಾಸ್ಯ ಕಲಾವಿದರು) ಮೈಸೂರು ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಯುತ ಸುಬ್ಬಯ್ಯನವರು ಆಗಮಿಸಿದ್ದರು.
ವಿದ್ಯಾರ್ಥಿಗಳಿಂದ ಜನಪದ ಗೀತೆ ಸ್ಪರ್ಧೆ, ಪ್ರಹಸನ,ನೃತ್ಯ ರೂಪಕ ಹೀಗೆ ನಾನಾ ರೀತಿಯ ಕಲಾ ಪ್ರಕಾರಗಳು ಪ್ರಸ್ತುತಗೊಂಡವು .ಮುಖ್ಯ ಅತಿಥಿಗಳಾದ ಮೈಸೂರು ಆನಂದ್ ರವರು ತಮ್ಮ ಮಾತಿನ ಮೋಡಿಯ ಮೂಲಕ ಸೇರಿದ್ದ ಸರ್ವರನ್ನು ನಗೆಗಡಲಲ್ಲಿ ಸೆರೆಹಿಡಿದರು .
ಕನ್ನಡ ನಾಡು-ನುಡಿಯ ಕುರಿತು ವೈಶಿಷ್ಟ್ಯ ಪೂರ್ಣವಾಗಿ ಸಂದೇಶವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಸೀತಾರಾಮ್, ಉಪಾಧ್ಯಕ್ಷರಾದ ಶ್ರೀಮತಿ ಸುಧಾ ಶಿವಸ್ವಾಮಿ, ಕಾರ್ಯದರ್ಶಿಗಳಾದ ಶ್ರೀಮತಿ ಸ್ವರೂಪಿಣಿ ಸಂದೇಶ್, ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಹರ್ಷಿದಾ ಹರಿಕುಮಾರ್ , ಉಪಪ್ರಾಂಶುಪಾಲರಾದ ಶ್ರೀಮತಿ ಸೂಜಿ಼ ಪಿಂಟೂ ರವರು ಉಪಸ್ಥಿತರಿದ್ದರು. ಕನ್ನಡನಾಡಿನ ಕಣ್ಮಣಿಗಳಾಗಿ, ಕನ್ನಡದ ಅಮೃತವನ್ನು ಸೇವಿಸಿ ಸದಾ ಕನ್ನಡಾಂಬೆಯ ನೈಜ ಭಜಕರಾಗಿರೋಣ ಎಂಬ ಘೋಷಣಾ ವಾಕ್ಯದಿಂದ ಕಾರ್ಯಕ್ರಮವು ಸಂಪನ್ನಗೊಂಡಿತು